*****ರೂಪ್ ಕುಂಡ್ ಸರೋವರ*****
(ರುದ್ರ ರಮಣೀಯ ಪದಕ್ಕೊಂದು ಅನ್ವರ್ಥನಾಮ)
(Roopkund Lake Trek Also known as Skeleton lake/Mysterious Lake)
ಚಾರಣಿಗನೊಬ್ಬನಿಗೆ ನೀನು ಜೀವಮಾನದಲ್ಲೊಮ್ಮೆ ನೋಡಿಯೇ ತೀರಬೇಕೆಂಬ ಅತೀವ ಹಂಬಲವಿರೋ ಚಾರಣದ ಗಮ್ಯಗಳ ಪಟ್ಟಿಯೇನಾದರೂ ಮಾಡಲು ಹೇಳಿದಲ್ಲಿ, ಆ ಪಟ್ಟಿಯಲ್ಲಿ ಮೊದಲ ಸ್ಥಾನ ಮೌಂಟ್ ಎವರೆಸ್ಟ್ ಪರ್ವತದ್ದಾದರೆ, ಎರಡನೇ ಸ್ಥಾನ ಖಂಡಿತಾ “ರೂಪ್ ಕುಂಡ್” ಸರೋವರ ಆಕ್ರಮಿಸಿಕೊಂಡಿರುತ್ತದೆ.ಅತ್ಯಂತ ಕ್ಲಿಷ್ಟ ಹಾಗೂ ಕಠಿಣತೆಯಿಂದ ಕೂಡಿದ ಚಾರಣವಾಗಿದ್ದಾಗ್ಯೂ ಜನರ ಚಿತ್ತವನ್ನು ತನ್ನತ್ತ ಕೇಂದ್ರೀಕರಿಸುವಂತೆ ಮಾಡೋ ಅಯಸ್ಕಾಂತೀಯ ಗುಣವುಳ್ಳ ಚಾರಣವಿದು.
ಸಮುದ್ರ ಮಟ್ಟದಿಂದ ಸರಿಸುಮಾರು 16500 ಅಡಿ ಎತ್ತರದಲ್ಲಿ,ಹಿಮಛ್ಛಾದಿತ ದೈತ್ಯ ತ್ರಿಶೂಲ್ ಪರ್ವತ ಶ್ರೇಣಿಯ ಹೃದಯಭಾಗದಲ್ಲಿ,ಈಗಷ್ಟೇ ಎದೆಹಾಲು ಕುಡಿದು ಮುಗುಳ್ನಗುತ್ತಾ ಮಲಗಿರೋ ಮಗುವೊಂದರ ಮುದ್ದು ಮೊಗದಂತೆ ಭಾಸವಾಗೋ ಪುಟ್ಟ ಸರೋವರವೊಂದು ಇಷ್ಟೊಂದು ಆಕರ್ಷಣೆಯ ಕೇಂದ್ರ ಬಿಂದುವಾಗಲು,ಅದರ ಸುಂದರತೆಯೋ,ಆ ನೀರಿನಲ್ಲಿರೋ ಔಷಧೀಯ ಗುಣವೋ ಅಥವಾ ಅದರ ಪೌರಾಣಿಕ ಹಿನ್ನಲೆಯೋ ಕಾರಣವಾಗಿದೆಯೆಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಷ್ಟೇ.ಯಾಕೆಂದರೆ ನಿಜಕ್ಕೂ ಜನರನ್ನು ಸೆಳೆಯುತ್ತಿರೋದು ಇದ್ಯಾವ ಸಂಗತಿಗಳೂ ಆಗಿರದೆ ನೂರಾರು ವರ್ಷಗಳಿಂದ ಸರೋವರದೊಳಗೆ ತಣ್ಣನೆ ಕುಳಿತಿರೋ ಮುನ್ನೂರಕ್ಕೂ ಹೆಚ್ಚು ಮಾನವನ ಅಸ್ಥಿಪಂಜರಗಳು ಸೇರಿದಂತೆ ಇನ್ನಿತರ ಆತನ ಅವಶೇಷಗಳು ಎಂದರೆ ನಂಬಲೇಬೇಕು.
ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಗೆ ಸೇರಿದಂತೆ ಆವರಿಸಿಕೊಂಡಿರೋ ತ್ರಿಶೂಲ್ ಪರ್ವತ ಸರಣಿಯ(ಮೂರು ಗಿರಿ ಶಿಖರಗಳು ತ್ರಿಶೂಲಾಕಾರಾದಲ್ಲಿ ಕಂಡು ಬರೋದ್ರಿಂದ ಈ ಹೆಸರು) ತಪ್ಪಲಿನಲ್ಲಿರೋ ಲೋಹಾರ್ ಜಂಗ್ ಎಂಬ ಪುಟ್ಟ ಹಳ್ಳಿಯಿಂದ ಮೊದಲಾಗಿ ಬರೋಬ್ಬರಿ ಎಪ್ಪತ್ತು ಕಿಲೋಮೀಟರುಗಳ ಕಾಲ್ನಡಿಗೆಯ ಚಾರಣವೊಂದು ಇದೇ ಹಳ್ಳಿಗೆ ಮರಳೋ ಮೂಲಕ ಮಂಗಳ ಹಾಡಲು ತೆಗೆದು ಕೊಳ್ಳೋದು ಸಂಪೂರ್ಣ ಒಂದು ವಾರ.ಸರೋವರಗಳ ನಗರಿಯೆಂದೇ ಪ್ರಖ್ಯಾತಿ ಹೊಂದಿರೋ ನೈನಿತಾಲ್ ನ ಕಾಟ್ ಗೋದಾಮ್ ನಿಂದ ರಾಣಿಖೇತ್,ಕೌಸಾನಿ,ದೇವಲ್ ಮಾರ್ಗವಾಗಿ 260 ಕಿಮೀ ಹಾದುಬಂದಲ್ಲಿ ಸಿಗೋ ಪುಟ್ಟ ಊರು ಲೋಹಾರ್ ಜಂಗ್.ಹೋಟೆಲ್,ಲಾಡ್ಜ್,ಎಟಿಎಮ್ ಅಥವಾ ಪೆಟ್ರೋಲ್ ಬಂಕ್ ಮೊದಲಾಗಿ ಯಾವೊಂದೂ ಸೌಲಭ್ಯಗಳಿಲ್ಲದ ಗ್ರಾಮವಿದು.
ಲೋಹಾರ್ ಜಂಗ್ ನಿಂದ ದಿದನಾ ಎಂಬ ಹಳ್ಳಿಯತ್ತ ಒಂಬತ್ತು ಕಿಮೀ ಸಾಗುವ ಮೂಲಕ ಮೊದಲ ದಿನದ ಚಾರಣಕ್ಕೊಂದು ತೆರೆ ಎಳೆಯಲಾಗುತ್ತದೆ.
ಪ್ರಯಾಣ ಮೊದಲಾಗುತ್ತಿದ್ದಂತೆಯೇ ನೀಲ್ ಗಂಗಾ ನದಿಗೆ ಅಡ್ಡಲಾಗಿ ಹಾಕಿರೋ ಕಬ್ಬಿಣದ ಸೇತುವೆಯೊಂದು ನಮ್ಮನ್ನು ಸ್ವಾಗತಿಸಲು ಸಿದ್ಧವಾದಂತೆ ನಿಂತಿರುತ್ತದೆ.ಇದನ್ನು ದಾಟಿದ ನಂತರದಲ್ಲಿ ಎರಡು ಆಯ್ಕೆಗಳಿರುತ್ತದೆ.ನೇರವಾಗಿ ಅರಣ್ಯ ಮಾರ್ಗದಲ್ಲಿ ಪರ್ವತಗಳನ್ನೇರುತ್ತಾ ದಿದನಾ ತಲುಪಬಹುದು,ಈ ಹಾದಿ ಉದ್ದವನ್ನು ಗಣನೆಗೆ ತೆಗೆದುಕೊಂಡರೆ ಸ್ವಲ್ಪ ಚಿಕ್ಕದೇ ಆದರೂ ಅತ್ಯಂತ ದುರ್ಗಮ ಹಾಗೂ ಚಾರಣಿಗನಿಗೊಂದು ಸವಾಲೆಸೆಯೋ ಹಾದಿಯಿದು.ಎರಡನೆಯದ್ದು ವಾಣ್ ಎಂಬ ಹಳ್ಳಿಯ ಮಾರ್ಗವಾಗಿ ಸಾಗಿ ಕುಲ್ಲಿಂಗ್ ಎಂಬ ಹಳ್ಳಿಯನ್ನು ಹಾಯ್ದು ದಿದನಾ ಸೇರಬಹುದು,ಇದು ಅಷ್ಟೇನೂ ಕಠಿಣವಲ್ಲದ ಆಗಾಗ ಕಾಣಿಸಿಕೊಳ್ಳೋ ಜನವಸತಿಯ ನಡುವೆ ಸಾಗುವ ಪಯಣವಿದು.ನಮ್ಮೀ ಚಾರಣದ ಹಾದಿಯಲ್ಲಿ ಸಿಗೋ ಕೊನೆಯ ಹಳ್ಳಿಯಿದು,ಇಲ್ಲಿಂದ ಮುಂದೆ ಸಂಪೂರ್ಣ ಹುಲ್ಲುಗಾವಲುಗಳೂ,ಓಕ್ ಮರಗಳಿಂದ ಕೂಡಿದ ಅರಣ್ಯ ಪ್ರದೇಶಗಳೂ,ಹಿಮಚ್ಛಾದಿತ ಪರ್ವತಗಳೇ ಜೊತೆಯಾಗುತ್ತಾ ಸಾಗುತ್ತವೆ.
ಎರಡನೇ ದಿನ ಆಲಿ ಬುಗ್ಯಾಲ್ ಮಾರ್ಗವಾಗಿ ಸಾಗಿ ಹನ್ನೆರಡು ಕಿಲೋಮೀಟರ್ ಊರದಲ್ಲಿರೋ ಬೇದ್ನಿ ಬುಗ್ಯಾಲ್ ತಲುಪುವ ಚಾರಣ ಮೊದಲ ಹಂತದಲ್ಲಿ ಓಕ್ ಕಾಡುಗಳನ್ನು ದಾಟಿದ ನಂತರದಲ್ಲಿ ಸಂಪೂರ್ಣ ಹುಲ್ಲುಗಾವಲುಗಳಿಂದ ಕೂಡಿದ ಪರ್ವತಗಳಂಚಲ್ಲೇ ಸಾಗುತ್ತದೆ.ಇಡೀ ಚಾರಣದಲ್ಲಿಯೇ ಅತ್ಯಂತ ಮನಮೋಹಕ ದೃಶ್ಯಗಳಿಂದ ಮನಸ್ಸಿಗೆ ಮುದನೀಡೋ ಪ್ರದೇಶವಿದು.
ಮೂರನೇ ದಿನ ಬೇದ್ನಿ ಬುಗ್ಯಾಲ್ ನಿಂದ 5ಕಿಮೀ ದೂರದಲ್ಲಿರೋ ಘೋರಾ ಲೋಟಾನಿ ಎಂಬಲ್ಲಿಗೆ ದಿನದ ಚಾರಣವನ್ನು ಅಂತ್ಯಗೊಳಿಸಲಾಗುತ್ತದೆ(ಅಂದೇ ಇಲ್ಲಿಂದ 6ಕಿಮೀ ದೂರದಲ್ಲಿರೋ ಭಾಗ್ವಾಭಾಸ ಎಂಬಲ್ಲಿಯ ವರೆಗೂ ಸಾಗಬಹುದಾಗಿದೆ.
ಇಲ್ಲಿ ಅಂತರಕ್ಕಿಂತಲೂ ಪ್ರಾಮುಖ್ಯತೆ ಪಡೆಯೋದು ಸಮುದ್ರಮಟ್ಟದಿಂದ ಇರೋ ಎತ್ತರಗಳು.ಬಹಳಷ್ಟು ಜನ ಈ ಎತ್ತರದ ಕಾರಣಕ್ಕಾಗಿ ತಲೆಸುತ್ತು,ಮೂಗಿನಿಂದ ರಕ್ತಸ್ರಾವ,ವಾಂತಿ ಇತ್ಯಾದಿ ಸಮಸ್ಯೆಗಳಿಗೊಳಪಡೋದ್ರಿಂದಾಗಿ ದಿನವೊಂದಕ್ಕೆ ಸರಾಸರಿ ಎರಡು ಸಾವಿರ ಅಡಿಗಳಷ್ಟೇ ಏರುವುದು ರೂಢಿಯಲ್ಲಿದೆ.)ಹಿಂದೆಲ್ಲಾ ರೂಪ್ ಕುಂಡ್ ಚಾರಣದಲ್ಲಿ ಕುದುರೆಗಳು ಹಾಗೂ ಖಚ್ಚರ್(ಗಂಡು ಕತ್ತೆ ಹಾಗೂ ಹೆಣ್ಣು ಕುದುರೆಯ ಸಮಾಗಮದಿಂದಾದ ಪ್ರಾಣಿ)ಗಳನ್ನು ಇಲ್ಲಿಯೇ ನಿಲ್ಲಿಸಿ ಮುಂದಿನ ಹಾದಿ ನಡೆದೇ ಸಾಗಬೇಕಿತ್ತು.ಆ ಕಾರಣಕ್ಕಾಗಿ ಈ ಜಾಗಕ್ಕೆ ಘೋರಾ ಲೋಟಾನೀ ಎಂಬ ಹೆಸರು ಬಂದಿದ್ದು.ಈಗ ಹಾಗೇನಿಲ್ಲ,ಭಾಗ್ವಾಭಾಸದವರೆಗೂ ಸಾಗಬಹುದಾಗಿದೆ.
ಮರುದಿನ ಘೋರಾ ಲೋಟಾನೀಯಿಂದ ಮೊದಲಾಗೋ ಚಾರಣ ಸಂಪೂರ್ಣ ಹಿಮದಿಂದಾವೃತ ಹಾದಿಯಲ್ಲಿಯೇ ಸಾಗುತ್ತದೆ,ಕಡಿದಾದ ರಸ್ತೆಗಳು ಒಂದೆಡೆಯಾದರೆ ಆಮ್ಲಜನಕದ ಕೊರತೆ ಇನ್ನೊಂದೆಡೆ ಚಾರಣಿಗನ ಆತ್ಮವಿಶ್ವಾಸಕ್ಕೊಂದು ದೊಡ್ಡ ಸವಾಲಾಗಿ ಪರಿಣಮಿಸಿಬಿಡುತ್ತವೆ.ಈ ದಿನದ ಚಾರಣದ ಪ್ರಮುಖ ಆಕರ್ಷಣೆ 14000 ಅಡಿ ಎತ್ತರದ ಪರ್ವತದ ತುದಿಯಲ್ಲಿರೋ ಪುಟ್ಟದಾದ ಕಾಲುವಿನಾಯಕ ಗುಡಿ.ಹಿಂದೆ ಪಾರ್ವತಿ ಸ್ನಾನಕ್ಕೆ ತೆರಳುವಾಗ ಗಣೇಶನನ್ನು ಇಲ್ಲಿಯೇ ಕಾವಲಿಗೆ ನಿಲ್ಲಿಸಿದ್ದ,ನಂತರದಲ್ಲಿ ಕೋಪೋದ್ರಿಕ್ತ ಶಿವ ಗಣೇಶನ ಶಿರಚ್ಛೇದನ ಮಾಡಿ ನಂತರದಲ್ಲಿ ಆನೆಯ ಮುಖ ಜೋಡಿಸಿದ ಜಾಗವೂ ಇದೆಂದು ಪ್ರತೀತಿಯಿದೆ.ಇಲ್ಲಿಂದ ಇನ್ನೊಂದು ಮಗ್ಗುಲಿಗೆ ಇಳಿಮುಖವಾಗಿ ಸಾಗುತ್ತಾ ತಲುಪೋದು ಭಾಗ್ವಾಭಾಸ,ಇದು ರೂಪ್ ಕುಂಡ್ ಚಾರಣದ ಬೇಸ್ ಕ್ಯಾಂಪ್ ಕೂಡಾ ಆಗಿದ್ದು ಇಲ್ಲಿ ಉಳಿದುಕೊಳ್ಳಲು ಪುಟ್ಟ ಬಂಕರ್ ಗಳನ್ನು ನಿರ್ಮಿಸಲಾಗಿದ್ದು ಅದರ ಅನುಕೂಲ ಪಡೆಯಬಹುದು.
ಇಂದು ಇಡೀ ಚಾರಣದಲ್ಲಿಯೇ ಅತ್ಯಂತ ಪ್ರಮುಖ ಹಾಗೂ ಸುಧೀರ್ಘ ಚಾರಣವೊಂದಕ್ಕೆ ಸಾಕ್ಷಿಯಾಗುತ್ತೇವೆ ಏಕೆಂದರೆ ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ವೀಕ್ಷಿಸೋದು ಒಂದು ಕಾರಣವಾದರೆ ಮರಳಿ ಬೇದ್ನೀ ಬುಗ್ಯಾಲ್ ವರೆಗೆ ತಲುಪಬೇಕಾದ 22ಕಿಮೀ ಚಾರಣ ಒಂದೇ ದಿನದಲ್ಲಿ ಕ್ರಮಿಸಬೇಕಾದ ಅನಿವಾರ್ಯತೆ ಇರುತ್ತದೆ.
ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ಸರೋವರ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸೋದು ಅಸ್ಥಿಪಂಜರ ಹಾಗೂ ತಲೆ ಬುರುಡೆಗಳ ರಾಶಿಯ ಗುಡಿಯೊಂದು.ಸರೋವರದ ಮೇಲ್ಭಾಗದಲ್ಲಿ ಅಲ್ಲಿ ಮಡಿದವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಕಲ್ಲುಗಳನ್ನು ಜೋಡಿಸಿ ನಡುವಲ್ಲಿ ಅಸ್ಥಿಪಂಜರಗಳನ್ನಿಟ್ಟು ಪುಟ್ಟದೊಂದು ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ,ಅವುಗಳಿಗೊಂದು ನಮನ ಸಲ್ಲಿಸಿ ಸಾಗುತ್ತಿದ್ದಂತೆಯೇ ಶಿವನ ಕಪಾಲದಂತೆ ಕಾಣೋ ರಚನೆಯೊದರ ನಡುವಲ್ಲಿ ನಮ್ಮ ದಾರಿಯೇ ಎದುರು ನೋಡುತ್ತಾ ಕುಳಿತಿರುವಂತೆ ಭಾಸವಾಗೋ ಪುಟ್ಟ ಸರೋವರದ ದರ್ಶನವಾಗುತ್ತದೆ.ನೀರು ಹೆಪ್ಪುಗಟ್ಟಿರದೇ ಇದ್ದಲ್ಲಿ ಅತ್ಯಂತ ಶುಭ್ರವಾದ ನೀರಿನಿಂದಾಗಿ ಸ್ಪಷ್ಟವಾಗಿ ನೀರಿನೊಳಗಿರೋ ಅಸ್ಥಿಪಂಜರಗಳ ಜೊತೆಜೊತೆಗೇ ಮೇಲ್ಬಾಗದಲ್ಲಿ ತೇಲುತ್ತಿರೋ ಚರ್ಮದ ಚಪ್ಪಲಿಗಳು,ಮರದ ಕಲಾಕೃತಿಗಳು,ಲೋಹದ ಆಯುಧಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವೀಕ್ಷಿಸಬಹುದಾಗಿದೆ.ವಾತಾವರಣ ಸಹಕಾರಿಯಾಗಿದ್ದಲ್ಲಿ ಸರೋವರದ ಮೇಲ್ಬಾಗದಲ್ಲಿರೋ ಜುನಾರ್ ಗಲ್ ಪಾಸ್ ವರೆಗೂ ಚಾರಣಮಾಡಬಹುದು ಜೊತೆಗೇ ಅಲ್ಲಿಂದ ರೂಪ್ ಕುಂಡ್ ಗ್ಲೇಶಿಯರ್,ತ್ರಿಶೂಲ್,ನಂದಾ ಗುಂಟಿ,ಚೌಕ್ ಹಂಬಾ ಪರ್ವತಗಳ ಅದ್ಭುತ ದೃಶ್ಯಗಳನ್ನೂ ಕಣ್ತುಂಬಿಕೊಳ್ಳಬಹುದು.
ಇಲ್ಲಿಂದ ಮರಳಿ ಭಾಗ್ವಾಭಾಸ ತಲುಪಿ ಅಲ್ಲಿಯೇ ಇರುಳು ಕಳೆದು ಮರುದಿನ ಪ್ರಯಾಣ ಮುಂದುವರೆಸಬಹುದಾದರೂ ಸಾಮಾನ್ಯವಾಗಿ ಅಂದೇ ಬೇದ್ನಿ ಭುಗ್ಯಾಲ್ ತಲುಪಿ ವಿರಮಿಸೋದು ಅಲ್ಲಿನ ವಾತಾವರಣದ ದೃಷ್ಟಿಯಿಂದ ಸೂಕ್ತ.ಮರುದಿನ ಬೇದ್ನಿ ಭುಗ್ಯಾಲಿನಿಂದ ವಾಣ್ ವರೆಗೂ ಟ್ರೆಕ್ ಮಾಡಿ ಅಲ್ಲಿಂದ ಸ್ಥಳೀಯವಾಗಿ ಲಭ್ಯವಿರೋ ಜೀಪುಗಳ ಮೂಲಕ ಲೋಹಾರ್ ಜಂಗ್ ತಲುಪೋ ಮುಖಾಂತರ ಅತ್ಯದ್ಭುತ ಹಾಗೂ ರೋಮಾಂಚಕ ಚಾರಣವೊಂದಕ್ಕೆ ತೆರೆ ಎಳೆದಂತಾಗುತ್ತದೆ.
ಸ್ಥಳೀಯ ಪ್ರೇಕ್ಷಣೀಯ ತಾಣಗಳು.
ಸರೋವರಗಳ ನಾಡೆಂದೇ ಖ್ಯಾತಿಯ ನೈನಿತಾಲ್,ಚೈನಾ ಪೀಕ್,ಕೇವ್ ಗಾರ್ಡನ್,ಸ್ಕೀಯಿಂಗ್ ನ ತವರೂರು ಔಲಿ,ಬ್ರಹ್ಮತಾಲ್ ಸರೋವರ,ಶಂಕರಾಚಾರ್ಯರು ತಪಸ್ಸು ಮಾಡಿದ ಗುಹೆ ಹಾಗೂ ದೇವಸ್ಥಾನವಿರೋ ಜೋಷಿಮಠಗಳನ್ನು ವೀಕ್ಷಿಸಬಹುದು.
ಕಲ್ಲು ವಿನಾಯಕ ಗುಡಿ.
ಘೋರಾ ಲೋಟಾನೀ ಯಿಂದ ಭಾಗ್ವಾಭಾಸ ಸಾಗುವ ಹಾದಿಯಲ್ಲಿ ಪರ್ವತದ ಮೇಲ್ಭಾಗದಲ್ಲಿ ಕಲ್ಲುಗಳನ್ನು ಜೋಡಿಸಿ ಪುಟ್ಟ ಗುಡಿಯೊಂದನ್ನು ರಚಿಸಲಾಗಿದ್ದು ಕಪ್ಪು ಶಿಲೆಯ ಗಣೇಶನ ವಿಗ್ರಹವನ್ನು ಸ್ಥಾಪಿಸಿಡಲಾಗಿದೆ.ಈ ಸ್ಥಳದಲ್ಲಿಯೇ ಪಾರ್ವತಿ ಗಣೇಶನನ್ನು ಸೃಷ್ಟಿಸಿ ಕಾವಲಿಗೆ ನಿಲ್ಲಿಸಿ ಸ್ನಾನಕ್ಕೆ ತೆರಳಿದ್ದಳೆಂದೂ,ತನ್ನನ್ನು ತಡೆದನೆಂಬ ಕಾರಣಕ್ಕೆ ಕೋಪೋದ್ರಿಕ್ತನಾಗಿ ಈಶ್ವರ ಈತನ ಶಿರಚ್ಛೇದನ ಮಾಡಿದನೆಂದೂ ಪ್ರತೀತಿಯಿದೆ.ಆ ಕಾರಣಕ್ಕಾಗಿಯೇ ಚಾರಣಿಗರು ಯಾವುದೇ ಅನಾಹುತವಾಗದಂತೆ ಚಾರಣ ಯಶಸ್ವಿಯಾಗಲೆಂದು ಈ ಗಣೇಶನಿಗೆ ಗಂಟೆಯೊಂದನ್ನು ಅರ್ಪಿಸುತ್ತೇವೆಂಬ ಹರಕೆ ಮಾಡಿಕೊಂಡು ತಮ್ಮೊಂದಿಗೆ ತಂದಿದ್ದ ಗಂಟೆಯನ್ನು ಇಲ್ಲಿ ಕಟ್ಟಿ ಮುಂದೆ ಸಾಗೋದು ವಾಡಿಕೆ.
ನೈನಿತಾಲ್.
ನೈನೀ ಸರೋವರದ ತಟದಲ್ಲಿರೋ ಸುಂದರ ನಗರಿಯಿದು.
ದೋಣಿ ವಿಹಾರ ಅಥವಾ ಬೋಟ್ ಹೌಸುಗಳಲ್ಲಿನ ವಾಸದ ಅನುಭವ ಪಡೆಯಲು ಸೂಕ್ತ ಸ್ಥಳ.ಇದಲ್ಲದೆ ಪ್ಯಾರಾ ಗ್ಲೈಡಿಂಗ್ ರೋಪ್ ಲೇನ್ ನಂತಹ ಹಲವು ಸಾಹಸೀ ಕ್ರೀಡೆಗಳಿಗೆಂದೇ ಪ್ರಖ್ಯಾತ ಟಿಫನ್ ಟಾಪ್,ಕಿಲ್ ಬುರೀ ಪಕ್ಷಿಧಾಮ,ರೋಚಕ ಗುಹೆಗಳ ಪಾರ್ಕ್ ಕೂಡಾ ಆಕರ್ಷಣೆಯ ಕೇಂದ್ರಬಿಂದು.ಇಲ್ಲಿ ಬೂಗರ್ಭದೊಳಗಿನ ಕೌತುಕಗಳ ಪರೀವೀಕ್ಷಣೆಯೂ ಲಭ್ಯ.
ಬ್ರಹ್ಮತಾಲ್.
ಬ್ರಹ್ಮಾಂಡವನ್ನು ಸೃಷ್ಟಿಸಿ ಜನರ ಹಣೆಬರಹ ಬರೆಯೋ ಸಮಯದಲ್ಲಿ ಬ್ರಹ್ಮ ತಪಸ್ಸಿಗೆ ಕುಳಿತಿದ್ದನೆನ್ನುವ ನಂಬಿಕೆ ಇಲ್ಲಿನ ಜನರಲ್ಲಿದ್ದು ಈಗಲೂ ತನ್ನ ಧ್ಯಾನ ಸಾಧನೆಗೆ ಇಲ್ಲಿಗೇ ಬರುತ್ತಾನೆಂದು ನಂಬುತ್ತಾರೆ.ಅಗಾಗಿಯೇ ಪ್ರತೀ ವರ್ಷ ನಿಗದಿತ ದಿನದಂದು ಸರೋವರಕ್ಕೆ ಪೂಜೆ ಸಲ್ಲಿಸಿ ಬ್ರಹ್ಮದೇವನಿಗೆ ನೈವೇದ್ಯ ಅರ್ಪಿಸಿ ಬರುತ್ತಾರೆ.ಚಮೋಲಿ ಜಿಲ್ಲೆಯ ಮುಂಡೋಲಿ ಎಂಬಲ್ಲಿರೋ ಈ ಸರೋವರ ಪ್ರೇಕ್ಷಣೀಯ ಸ್ಥಳವಷ್ಟೇ ಅಲ್ಲದೆ ಸ್ಥಳೀಯರ ಶೃದ್ಧಾಕೇಂದ್ರವೂ ಹೌದು.
ಔಲೀ..
ಏಷ್ಯಾ ಖಂಡದಲ್ಲಿಯೇ ಎರಡನೆಯ ಅತ್ಯಂತ ಉದ್ದ ಹಾಗೂ ಎತ್ತರದ ರೋಪ್ ವೇ ಹೊಂದಿರೋ ಪ್ರದೇಶವಿದು,ಸ್ಕೀಯಿಂಗ್ ಪ್ರಿಯರಿಗಾಗಿ ಚಳಿಗಾಲದಲ್ಲಿ ವಿಶೇಷ ತರಬೇತಿಯೂ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.ಇಲ್ಲಿಯೇ ಉಳಿದುಕೊಳ್ಳಲು ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ.
ತಲುಪುವ ಬಗೆ...
ಸಮೀಪದ ವಿಮಾನ ನಿಲ್ದಾಣ :- ಪಂತ್ ನಗರ್.
ಸಮೀಪದ ರೈಲ್ವೇ ನಿಲ್ದಾಣ :- ಕಾಠ್ ಗೋದಾಮ್.ಹರಿದ್ವಾರ
ರಸ್ತೆ ಮಾರ್ಗ :- ನೈನಿತಾಲಿನಿಂದ ಹಾಗೂ ಋಷಿಕೇಶದಿಂದ ಬಸ್ ಸೌಲಭ್ಯವಿದೆ.
ಉಳಿದುಕೊಳ್ಳಲು...
ನೈನಿತಾಲ್ ನಲ್ಲಿ ಸಾಕಷ್ಟು ಸಂಖ್ಯೆಯ ಬೋಟ್ ಹೌಸ್,ಹೋಟೆಲ್ಗಳು ಲಭ್ಯವಿದೆ.
ಲೋಹಾರ್ ಜಂಗ್ ನಲ್ಲಿ ಪತ್ವಾಲ್ ಹೋಟೆಲ್ ಸೇರಿದಂತೆ ಅನೇಕ ಹೋಮ್ ಸ್ಟೇ ಗಳು ಲಭ್ಯವಿದೆ.
ದಿದನಾ ಹಾಗೂ ವಾಣ್ ಗ್ರಾಮಗಳಲ್ಲಿ ಹೋಮ್ ಸ್ಟೇಗಳು ಲಭ್ಯವಿದೆ.
#RoopkundTrekk #SkeletonLake #MysteriousLake #BrahmatalLake
(ರುದ್ರ ರಮಣೀಯ ಪದಕ್ಕೊಂದು ಅನ್ವರ್ಥನಾಮ)
(Roopkund Lake Trek Also known as Skeleton lake/Mysterious Lake)
ಚಾರಣಿಗನೊಬ್ಬನಿಗೆ ನೀನು ಜೀವಮಾನದಲ್ಲೊಮ್ಮೆ ನೋಡಿಯೇ ತೀರಬೇಕೆಂಬ ಅತೀವ ಹಂಬಲವಿರೋ ಚಾರಣದ ಗಮ್ಯಗಳ ಪಟ್ಟಿಯೇನಾದರೂ ಮಾಡಲು ಹೇಳಿದಲ್ಲಿ, ಆ ಪಟ್ಟಿಯಲ್ಲಿ ಮೊದಲ ಸ್ಥಾನ ಮೌಂಟ್ ಎವರೆಸ್ಟ್ ಪರ್ವತದ್ದಾದರೆ, ಎರಡನೇ ಸ್ಥಾನ ಖಂಡಿತಾ “ರೂಪ್ ಕುಂಡ್” ಸರೋವರ ಆಕ್ರಮಿಸಿಕೊಂಡಿರುತ್ತದೆ.ಅತ್ಯಂತ ಕ್ಲಿಷ್ಟ ಹಾಗೂ ಕಠಿಣತೆಯಿಂದ ಕೂಡಿದ ಚಾರಣವಾಗಿದ್ದಾಗ್ಯೂ ಜನರ ಚಿತ್ತವನ್ನು ತನ್ನತ್ತ ಕೇಂದ್ರೀಕರಿಸುವಂತೆ ಮಾಡೋ ಅಯಸ್ಕಾಂತೀಯ ಗುಣವುಳ್ಳ ಚಾರಣವಿದು.
ಸಮುದ್ರ ಮಟ್ಟದಿಂದ ಸರಿಸುಮಾರು 16500 ಅಡಿ ಎತ್ತರದಲ್ಲಿ,ಹಿಮಛ್ಛಾದಿತ ದೈತ್ಯ ತ್ರಿಶೂಲ್ ಪರ್ವತ ಶ್ರೇಣಿಯ ಹೃದಯಭಾಗದಲ್ಲಿ,ಈಗಷ್ಟೇ ಎದೆಹಾಲು ಕುಡಿದು ಮುಗುಳ್ನಗುತ್ತಾ ಮಲಗಿರೋ ಮಗುವೊಂದರ ಮುದ್ದು ಮೊಗದಂತೆ ಭಾಸವಾಗೋ ಪುಟ್ಟ ಸರೋವರವೊಂದು ಇಷ್ಟೊಂದು ಆಕರ್ಷಣೆಯ ಕೇಂದ್ರ ಬಿಂದುವಾಗಲು,ಅದರ ಸುಂದರತೆಯೋ,ಆ ನೀರಿನಲ್ಲಿರೋ ಔಷಧೀಯ ಗುಣವೋ ಅಥವಾ ಅದರ ಪೌರಾಣಿಕ ಹಿನ್ನಲೆಯೋ ಕಾರಣವಾಗಿದೆಯೆಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಷ್ಟೇ.ಯಾಕೆಂದರೆ ನಿಜಕ್ಕೂ ಜನರನ್ನು ಸೆಳೆಯುತ್ತಿರೋದು ಇದ್ಯಾವ ಸಂಗತಿಗಳೂ ಆಗಿರದೆ ನೂರಾರು ವರ್ಷಗಳಿಂದ ಸರೋವರದೊಳಗೆ ತಣ್ಣನೆ ಕುಳಿತಿರೋ ಮುನ್ನೂರಕ್ಕೂ ಹೆಚ್ಚು ಮಾನವನ ಅಸ್ಥಿಪಂಜರಗಳು ಸೇರಿದಂತೆ ಇನ್ನಿತರ ಆತನ ಅವಶೇಷಗಳು ಎಂದರೆ ನಂಬಲೇಬೇಕು.
ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಗೆ ಸೇರಿದಂತೆ ಆವರಿಸಿಕೊಂಡಿರೋ ತ್ರಿಶೂಲ್ ಪರ್ವತ ಸರಣಿಯ(ಮೂರು ಗಿರಿ ಶಿಖರಗಳು ತ್ರಿಶೂಲಾಕಾರಾದಲ್ಲಿ ಕಂಡು ಬರೋದ್ರಿಂದ ಈ ಹೆಸರು) ತಪ್ಪಲಿನಲ್ಲಿರೋ ಲೋಹಾರ್ ಜಂಗ್ ಎಂಬ ಪುಟ್ಟ ಹಳ್ಳಿಯಿಂದ ಮೊದಲಾಗಿ ಬರೋಬ್ಬರಿ ಎಪ್ಪತ್ತು ಕಿಲೋಮೀಟರುಗಳ ಕಾಲ್ನಡಿಗೆಯ ಚಾರಣವೊಂದು ಇದೇ ಹಳ್ಳಿಗೆ ಮರಳೋ ಮೂಲಕ ಮಂಗಳ ಹಾಡಲು ತೆಗೆದು ಕೊಳ್ಳೋದು ಸಂಪೂರ್ಣ ಒಂದು ವಾರ.ಸರೋವರಗಳ ನಗರಿಯೆಂದೇ ಪ್ರಖ್ಯಾತಿ ಹೊಂದಿರೋ ನೈನಿತಾಲ್ ನ ಕಾಟ್ ಗೋದಾಮ್ ನಿಂದ ರಾಣಿಖೇತ್,ಕೌಸಾನಿ,ದೇವಲ್ ಮಾರ್ಗವಾಗಿ 260 ಕಿಮೀ ಹಾದುಬಂದಲ್ಲಿ ಸಿಗೋ ಪುಟ್ಟ ಊರು ಲೋಹಾರ್ ಜಂಗ್.ಹೋಟೆಲ್,ಲಾಡ್ಜ್,ಎಟಿಎಮ್ ಅಥವಾ ಪೆಟ್ರೋಲ್ ಬಂಕ್ ಮೊದಲಾಗಿ ಯಾವೊಂದೂ ಸೌಲಭ್ಯಗಳಿಲ್ಲದ ಗ್ರಾಮವಿದು.
ಲೋಹಾರ್ ಜಂಗ್ ನಿಂದ ದಿದನಾ ಎಂಬ ಹಳ್ಳಿಯತ್ತ ಒಂಬತ್ತು ಕಿಮೀ ಸಾಗುವ ಮೂಲಕ ಮೊದಲ ದಿನದ ಚಾರಣಕ್ಕೊಂದು ತೆರೆ ಎಳೆಯಲಾಗುತ್ತದೆ.
ಪ್ರಯಾಣ ಮೊದಲಾಗುತ್ತಿದ್ದಂತೆಯೇ ನೀಲ್ ಗಂಗಾ ನದಿಗೆ ಅಡ್ಡಲಾಗಿ ಹಾಕಿರೋ ಕಬ್ಬಿಣದ ಸೇತುವೆಯೊಂದು ನಮ್ಮನ್ನು ಸ್ವಾಗತಿಸಲು ಸಿದ್ಧವಾದಂತೆ ನಿಂತಿರುತ್ತದೆ.ಇದನ್ನು ದಾಟಿದ ನಂತರದಲ್ಲಿ ಎರಡು ಆಯ್ಕೆಗಳಿರುತ್ತದೆ.ನೇರವಾಗಿ ಅರಣ್ಯ ಮಾರ್ಗದಲ್ಲಿ ಪರ್ವತಗಳನ್ನೇರುತ್ತಾ ದಿದನಾ ತಲುಪಬಹುದು,ಈ ಹಾದಿ ಉದ್ದವನ್ನು ಗಣನೆಗೆ ತೆಗೆದುಕೊಂಡರೆ ಸ್ವಲ್ಪ ಚಿಕ್ಕದೇ ಆದರೂ ಅತ್ಯಂತ ದುರ್ಗಮ ಹಾಗೂ ಚಾರಣಿಗನಿಗೊಂದು ಸವಾಲೆಸೆಯೋ ಹಾದಿಯಿದು.ಎರಡನೆಯದ್ದು ವಾಣ್ ಎಂಬ ಹಳ್ಳಿಯ ಮಾರ್ಗವಾಗಿ ಸಾಗಿ ಕುಲ್ಲಿಂಗ್ ಎಂಬ ಹಳ್ಳಿಯನ್ನು ಹಾಯ್ದು ದಿದನಾ ಸೇರಬಹುದು,ಇದು ಅಷ್ಟೇನೂ ಕಠಿಣವಲ್ಲದ ಆಗಾಗ ಕಾಣಿಸಿಕೊಳ್ಳೋ ಜನವಸತಿಯ ನಡುವೆ ಸಾಗುವ ಪಯಣವಿದು.ನಮ್ಮೀ ಚಾರಣದ ಹಾದಿಯಲ್ಲಿ ಸಿಗೋ ಕೊನೆಯ ಹಳ್ಳಿಯಿದು,ಇಲ್ಲಿಂದ ಮುಂದೆ ಸಂಪೂರ್ಣ ಹುಲ್ಲುಗಾವಲುಗಳೂ,ಓಕ್ ಮರಗಳಿಂದ ಕೂಡಿದ ಅರಣ್ಯ ಪ್ರದೇಶಗಳೂ,ಹಿಮಚ್ಛಾದಿತ ಪರ್ವತಗಳೇ ಜೊತೆಯಾಗುತ್ತಾ ಸಾಗುತ್ತವೆ.
ಎರಡನೇ ದಿನ ಆಲಿ ಬುಗ್ಯಾಲ್ ಮಾರ್ಗವಾಗಿ ಸಾಗಿ ಹನ್ನೆರಡು ಕಿಲೋಮೀಟರ್ ಊರದಲ್ಲಿರೋ ಬೇದ್ನಿ ಬುಗ್ಯಾಲ್ ತಲುಪುವ ಚಾರಣ ಮೊದಲ ಹಂತದಲ್ಲಿ ಓಕ್ ಕಾಡುಗಳನ್ನು ದಾಟಿದ ನಂತರದಲ್ಲಿ ಸಂಪೂರ್ಣ ಹುಲ್ಲುಗಾವಲುಗಳಿಂದ ಕೂಡಿದ ಪರ್ವತಗಳಂಚಲ್ಲೇ ಸಾಗುತ್ತದೆ.ಇಡೀ ಚಾರಣದಲ್ಲಿಯೇ ಅತ್ಯಂತ ಮನಮೋಹಕ ದೃಶ್ಯಗಳಿಂದ ಮನಸ್ಸಿಗೆ ಮುದನೀಡೋ ಪ್ರದೇಶವಿದು.
ಮೂರನೇ ದಿನ ಬೇದ್ನಿ ಬುಗ್ಯಾಲ್ ನಿಂದ 5ಕಿಮೀ ದೂರದಲ್ಲಿರೋ ಘೋರಾ ಲೋಟಾನಿ ಎಂಬಲ್ಲಿಗೆ ದಿನದ ಚಾರಣವನ್ನು ಅಂತ್ಯಗೊಳಿಸಲಾಗುತ್ತದೆ(ಅಂದೇ ಇಲ್ಲಿಂದ 6ಕಿಮೀ ದೂರದಲ್ಲಿರೋ ಭಾಗ್ವಾಭಾಸ ಎಂಬಲ್ಲಿಯ ವರೆಗೂ ಸಾಗಬಹುದಾಗಿದೆ.
ಇಲ್ಲಿ ಅಂತರಕ್ಕಿಂತಲೂ ಪ್ರಾಮುಖ್ಯತೆ ಪಡೆಯೋದು ಸಮುದ್ರಮಟ್ಟದಿಂದ ಇರೋ ಎತ್ತರಗಳು.ಬಹಳಷ್ಟು ಜನ ಈ ಎತ್ತರದ ಕಾರಣಕ್ಕಾಗಿ ತಲೆಸುತ್ತು,ಮೂಗಿನಿಂದ ರಕ್ತಸ್ರಾವ,ವಾಂತಿ ಇತ್ಯಾದಿ ಸಮಸ್ಯೆಗಳಿಗೊಳಪಡೋದ್ರಿಂದಾಗಿ ದಿನವೊಂದಕ್ಕೆ ಸರಾಸರಿ ಎರಡು ಸಾವಿರ ಅಡಿಗಳಷ್ಟೇ ಏರುವುದು ರೂಢಿಯಲ್ಲಿದೆ.)ಹಿಂದೆಲ್ಲಾ ರೂಪ್ ಕುಂಡ್ ಚಾರಣದಲ್ಲಿ ಕುದುರೆಗಳು ಹಾಗೂ ಖಚ್ಚರ್(ಗಂಡು ಕತ್ತೆ ಹಾಗೂ ಹೆಣ್ಣು ಕುದುರೆಯ ಸಮಾಗಮದಿಂದಾದ ಪ್ರಾಣಿ)ಗಳನ್ನು ಇಲ್ಲಿಯೇ ನಿಲ್ಲಿಸಿ ಮುಂದಿನ ಹಾದಿ ನಡೆದೇ ಸಾಗಬೇಕಿತ್ತು.ಆ ಕಾರಣಕ್ಕಾಗಿ ಈ ಜಾಗಕ್ಕೆ ಘೋರಾ ಲೋಟಾನೀ ಎಂಬ ಹೆಸರು ಬಂದಿದ್ದು.ಈಗ ಹಾಗೇನಿಲ್ಲ,ಭಾಗ್ವಾಭಾಸದವರೆಗೂ ಸಾಗಬಹುದಾಗಿದೆ.
ಮರುದಿನ ಘೋರಾ ಲೋಟಾನೀಯಿಂದ ಮೊದಲಾಗೋ ಚಾರಣ ಸಂಪೂರ್ಣ ಹಿಮದಿಂದಾವೃತ ಹಾದಿಯಲ್ಲಿಯೇ ಸಾಗುತ್ತದೆ,ಕಡಿದಾದ ರಸ್ತೆಗಳು ಒಂದೆಡೆಯಾದರೆ ಆಮ್ಲಜನಕದ ಕೊರತೆ ಇನ್ನೊಂದೆಡೆ ಚಾರಣಿಗನ ಆತ್ಮವಿಶ್ವಾಸಕ್ಕೊಂದು ದೊಡ್ಡ ಸವಾಲಾಗಿ ಪರಿಣಮಿಸಿಬಿಡುತ್ತವೆ.ಈ ದಿನದ ಚಾರಣದ ಪ್ರಮುಖ ಆಕರ್ಷಣೆ 14000 ಅಡಿ ಎತ್ತರದ ಪರ್ವತದ ತುದಿಯಲ್ಲಿರೋ ಪುಟ್ಟದಾದ ಕಾಲುವಿನಾಯಕ ಗುಡಿ.ಹಿಂದೆ ಪಾರ್ವತಿ ಸ್ನಾನಕ್ಕೆ ತೆರಳುವಾಗ ಗಣೇಶನನ್ನು ಇಲ್ಲಿಯೇ ಕಾವಲಿಗೆ ನಿಲ್ಲಿಸಿದ್ದ,ನಂತರದಲ್ಲಿ ಕೋಪೋದ್ರಿಕ್ತ ಶಿವ ಗಣೇಶನ ಶಿರಚ್ಛೇದನ ಮಾಡಿ ನಂತರದಲ್ಲಿ ಆನೆಯ ಮುಖ ಜೋಡಿಸಿದ ಜಾಗವೂ ಇದೆಂದು ಪ್ರತೀತಿಯಿದೆ.ಇಲ್ಲಿಂದ ಇನ್ನೊಂದು ಮಗ್ಗುಲಿಗೆ ಇಳಿಮುಖವಾಗಿ ಸಾಗುತ್ತಾ ತಲುಪೋದು ಭಾಗ್ವಾಭಾಸ,ಇದು ರೂಪ್ ಕುಂಡ್ ಚಾರಣದ ಬೇಸ್ ಕ್ಯಾಂಪ್ ಕೂಡಾ ಆಗಿದ್ದು ಇಲ್ಲಿ ಉಳಿದುಕೊಳ್ಳಲು ಪುಟ್ಟ ಬಂಕರ್ ಗಳನ್ನು ನಿರ್ಮಿಸಲಾಗಿದ್ದು ಅದರ ಅನುಕೂಲ ಪಡೆಯಬಹುದು.
ಇಂದು ಇಡೀ ಚಾರಣದಲ್ಲಿಯೇ ಅತ್ಯಂತ ಪ್ರಮುಖ ಹಾಗೂ ಸುಧೀರ್ಘ ಚಾರಣವೊಂದಕ್ಕೆ ಸಾಕ್ಷಿಯಾಗುತ್ತೇವೆ ಏಕೆಂದರೆ ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ವೀಕ್ಷಿಸೋದು ಒಂದು ಕಾರಣವಾದರೆ ಮರಳಿ ಬೇದ್ನೀ ಬುಗ್ಯಾಲ್ ವರೆಗೆ ತಲುಪಬೇಕಾದ 22ಕಿಮೀ ಚಾರಣ ಒಂದೇ ದಿನದಲ್ಲಿ ಕ್ರಮಿಸಬೇಕಾದ ಅನಿವಾರ್ಯತೆ ಇರುತ್ತದೆ.
ಭಾಗ್ವಾಭಾಸದಿಂದ ಹೊರಟು ರೂಪ್ ಕುಂಡ್ ಸರೋವರ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸೋದು ಅಸ್ಥಿಪಂಜರ ಹಾಗೂ ತಲೆ ಬುರುಡೆಗಳ ರಾಶಿಯ ಗುಡಿಯೊಂದು.ಸರೋವರದ ಮೇಲ್ಭಾಗದಲ್ಲಿ ಅಲ್ಲಿ ಮಡಿದವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಕಲ್ಲುಗಳನ್ನು ಜೋಡಿಸಿ ನಡುವಲ್ಲಿ ಅಸ್ಥಿಪಂಜರಗಳನ್ನಿಟ್ಟು ಪುಟ್ಟದೊಂದು ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ,ಅವುಗಳಿಗೊಂದು ನಮನ ಸಲ್ಲಿಸಿ ಸಾಗುತ್ತಿದ್ದಂತೆಯೇ ಶಿವನ ಕಪಾಲದಂತೆ ಕಾಣೋ ರಚನೆಯೊದರ ನಡುವಲ್ಲಿ ನಮ್ಮ ದಾರಿಯೇ ಎದುರು ನೋಡುತ್ತಾ ಕುಳಿತಿರುವಂತೆ ಭಾಸವಾಗೋ ಪುಟ್ಟ ಸರೋವರದ ದರ್ಶನವಾಗುತ್ತದೆ.ನೀರು ಹೆಪ್ಪುಗಟ್ಟಿರದೇ ಇದ್ದಲ್ಲಿ ಅತ್ಯಂತ ಶುಭ್ರವಾದ ನೀರಿನಿಂದಾಗಿ ಸ್ಪಷ್ಟವಾಗಿ ನೀರಿನೊಳಗಿರೋ ಅಸ್ಥಿಪಂಜರಗಳ ಜೊತೆಜೊತೆಗೇ ಮೇಲ್ಬಾಗದಲ್ಲಿ ತೇಲುತ್ತಿರೋ ಚರ್ಮದ ಚಪ್ಪಲಿಗಳು,ಮರದ ಕಲಾಕೃತಿಗಳು,ಲೋಹದ ಆಯುಧಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವೀಕ್ಷಿಸಬಹುದಾಗಿದೆ.ವಾತಾವರಣ ಸಹಕಾರಿಯಾಗಿದ್ದಲ್ಲಿ ಸರೋವರದ ಮೇಲ್ಬಾಗದಲ್ಲಿರೋ ಜುನಾರ್ ಗಲ್ ಪಾಸ್ ವರೆಗೂ ಚಾರಣಮಾಡಬಹುದು ಜೊತೆಗೇ ಅಲ್ಲಿಂದ ರೂಪ್ ಕುಂಡ್ ಗ್ಲೇಶಿಯರ್,ತ್ರಿಶೂಲ್,ನಂದಾ ಗುಂಟಿ,ಚೌಕ್ ಹಂಬಾ ಪರ್ವತಗಳ ಅದ್ಭುತ ದೃಶ್ಯಗಳನ್ನೂ ಕಣ್ತುಂಬಿಕೊಳ್ಳಬಹುದು.
ಇಲ್ಲಿಂದ ಮರಳಿ ಭಾಗ್ವಾಭಾಸ ತಲುಪಿ ಅಲ್ಲಿಯೇ ಇರುಳು ಕಳೆದು ಮರುದಿನ ಪ್ರಯಾಣ ಮುಂದುವರೆಸಬಹುದಾದರೂ ಸಾಮಾನ್ಯವಾಗಿ ಅಂದೇ ಬೇದ್ನಿ ಭುಗ್ಯಾಲ್ ತಲುಪಿ ವಿರಮಿಸೋದು ಅಲ್ಲಿನ ವಾತಾವರಣದ ದೃಷ್ಟಿಯಿಂದ ಸೂಕ್ತ.ಮರುದಿನ ಬೇದ್ನಿ ಭುಗ್ಯಾಲಿನಿಂದ ವಾಣ್ ವರೆಗೂ ಟ್ರೆಕ್ ಮಾಡಿ ಅಲ್ಲಿಂದ ಸ್ಥಳೀಯವಾಗಿ ಲಭ್ಯವಿರೋ ಜೀಪುಗಳ ಮೂಲಕ ಲೋಹಾರ್ ಜಂಗ್ ತಲುಪೋ ಮುಖಾಂತರ ಅತ್ಯದ್ಭುತ ಹಾಗೂ ರೋಮಾಂಚಕ ಚಾರಣವೊಂದಕ್ಕೆ ತೆರೆ ಎಳೆದಂತಾಗುತ್ತದೆ.
ಸ್ಥಳೀಯ ಪ್ರೇಕ್ಷಣೀಯ ತಾಣಗಳು.
ಸರೋವರಗಳ ನಾಡೆಂದೇ ಖ್ಯಾತಿಯ ನೈನಿತಾಲ್,ಚೈನಾ ಪೀಕ್,ಕೇವ್ ಗಾರ್ಡನ್,ಸ್ಕೀಯಿಂಗ್ ನ ತವರೂರು ಔಲಿ,ಬ್ರಹ್ಮತಾಲ್ ಸರೋವರ,ಶಂಕರಾಚಾರ್ಯರು ತಪಸ್ಸು ಮಾಡಿದ ಗುಹೆ ಹಾಗೂ ದೇವಸ್ಥಾನವಿರೋ ಜೋಷಿಮಠಗಳನ್ನು ವೀಕ್ಷಿಸಬಹುದು.
ಕಲ್ಲು ವಿನಾಯಕ ಗುಡಿ.
ಘೋರಾ ಲೋಟಾನೀ ಯಿಂದ ಭಾಗ್ವಾಭಾಸ ಸಾಗುವ ಹಾದಿಯಲ್ಲಿ ಪರ್ವತದ ಮೇಲ್ಭಾಗದಲ್ಲಿ ಕಲ್ಲುಗಳನ್ನು ಜೋಡಿಸಿ ಪುಟ್ಟ ಗುಡಿಯೊಂದನ್ನು ರಚಿಸಲಾಗಿದ್ದು ಕಪ್ಪು ಶಿಲೆಯ ಗಣೇಶನ ವಿಗ್ರಹವನ್ನು ಸ್ಥಾಪಿಸಿಡಲಾಗಿದೆ.ಈ ಸ್ಥಳದಲ್ಲಿಯೇ ಪಾರ್ವತಿ ಗಣೇಶನನ್ನು ಸೃಷ್ಟಿಸಿ ಕಾವಲಿಗೆ ನಿಲ್ಲಿಸಿ ಸ್ನಾನಕ್ಕೆ ತೆರಳಿದ್ದಳೆಂದೂ,ತನ್ನನ್ನು ತಡೆದನೆಂಬ ಕಾರಣಕ್ಕೆ ಕೋಪೋದ್ರಿಕ್ತನಾಗಿ ಈಶ್ವರ ಈತನ ಶಿರಚ್ಛೇದನ ಮಾಡಿದನೆಂದೂ ಪ್ರತೀತಿಯಿದೆ.ಆ ಕಾರಣಕ್ಕಾಗಿಯೇ ಚಾರಣಿಗರು ಯಾವುದೇ ಅನಾಹುತವಾಗದಂತೆ ಚಾರಣ ಯಶಸ್ವಿಯಾಗಲೆಂದು ಈ ಗಣೇಶನಿಗೆ ಗಂಟೆಯೊಂದನ್ನು ಅರ್ಪಿಸುತ್ತೇವೆಂಬ ಹರಕೆ ಮಾಡಿಕೊಂಡು ತಮ್ಮೊಂದಿಗೆ ತಂದಿದ್ದ ಗಂಟೆಯನ್ನು ಇಲ್ಲಿ ಕಟ್ಟಿ ಮುಂದೆ ಸಾಗೋದು ವಾಡಿಕೆ.
ನೈನಿತಾಲ್.
ನೈನೀ ಸರೋವರದ ತಟದಲ್ಲಿರೋ ಸುಂದರ ನಗರಿಯಿದು.
ದೋಣಿ ವಿಹಾರ ಅಥವಾ ಬೋಟ್ ಹೌಸುಗಳಲ್ಲಿನ ವಾಸದ ಅನುಭವ ಪಡೆಯಲು ಸೂಕ್ತ ಸ್ಥಳ.ಇದಲ್ಲದೆ ಪ್ಯಾರಾ ಗ್ಲೈಡಿಂಗ್ ರೋಪ್ ಲೇನ್ ನಂತಹ ಹಲವು ಸಾಹಸೀ ಕ್ರೀಡೆಗಳಿಗೆಂದೇ ಪ್ರಖ್ಯಾತ ಟಿಫನ್ ಟಾಪ್,ಕಿಲ್ ಬುರೀ ಪಕ್ಷಿಧಾಮ,ರೋಚಕ ಗುಹೆಗಳ ಪಾರ್ಕ್ ಕೂಡಾ ಆಕರ್ಷಣೆಯ ಕೇಂದ್ರಬಿಂದು.ಇಲ್ಲಿ ಬೂಗರ್ಭದೊಳಗಿನ ಕೌತುಕಗಳ ಪರೀವೀಕ್ಷಣೆಯೂ ಲಭ್ಯ.
ಬ್ರಹ್ಮತಾಲ್.
ಬ್ರಹ್ಮಾಂಡವನ್ನು ಸೃಷ್ಟಿಸಿ ಜನರ ಹಣೆಬರಹ ಬರೆಯೋ ಸಮಯದಲ್ಲಿ ಬ್ರಹ್ಮ ತಪಸ್ಸಿಗೆ ಕುಳಿತಿದ್ದನೆನ್ನುವ ನಂಬಿಕೆ ಇಲ್ಲಿನ ಜನರಲ್ಲಿದ್ದು ಈಗಲೂ ತನ್ನ ಧ್ಯಾನ ಸಾಧನೆಗೆ ಇಲ್ಲಿಗೇ ಬರುತ್ತಾನೆಂದು ನಂಬುತ್ತಾರೆ.ಅಗಾಗಿಯೇ ಪ್ರತೀ ವರ್ಷ ನಿಗದಿತ ದಿನದಂದು ಸರೋವರಕ್ಕೆ ಪೂಜೆ ಸಲ್ಲಿಸಿ ಬ್ರಹ್ಮದೇವನಿಗೆ ನೈವೇದ್ಯ ಅರ್ಪಿಸಿ ಬರುತ್ತಾರೆ.ಚಮೋಲಿ ಜಿಲ್ಲೆಯ ಮುಂಡೋಲಿ ಎಂಬಲ್ಲಿರೋ ಈ ಸರೋವರ ಪ್ರೇಕ್ಷಣೀಯ ಸ್ಥಳವಷ್ಟೇ ಅಲ್ಲದೆ ಸ್ಥಳೀಯರ ಶೃದ್ಧಾಕೇಂದ್ರವೂ ಹೌದು.
ಔಲೀ..
ಏಷ್ಯಾ ಖಂಡದಲ್ಲಿಯೇ ಎರಡನೆಯ ಅತ್ಯಂತ ಉದ್ದ ಹಾಗೂ ಎತ್ತರದ ರೋಪ್ ವೇ ಹೊಂದಿರೋ ಪ್ರದೇಶವಿದು,ಸ್ಕೀಯಿಂಗ್ ಪ್ರಿಯರಿಗಾಗಿ ಚಳಿಗಾಲದಲ್ಲಿ ವಿಶೇಷ ತರಬೇತಿಯೂ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.ಇಲ್ಲಿಯೇ ಉಳಿದುಕೊಳ್ಳಲು ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ.
ತಲುಪುವ ಬಗೆ...
ಸಮೀಪದ ವಿಮಾನ ನಿಲ್ದಾಣ :- ಪಂತ್ ನಗರ್.
ಸಮೀಪದ ರೈಲ್ವೇ ನಿಲ್ದಾಣ :- ಕಾಠ್ ಗೋದಾಮ್.ಹರಿದ್ವಾರ
ರಸ್ತೆ ಮಾರ್ಗ :- ನೈನಿತಾಲಿನಿಂದ ಹಾಗೂ ಋಷಿಕೇಶದಿಂದ ಬಸ್ ಸೌಲಭ್ಯವಿದೆ.
ಉಳಿದುಕೊಳ್ಳಲು...
ನೈನಿತಾಲ್ ನಲ್ಲಿ ಸಾಕಷ್ಟು ಸಂಖ್ಯೆಯ ಬೋಟ್ ಹೌಸ್,ಹೋಟೆಲ್ಗಳು ಲಭ್ಯವಿದೆ.
ಲೋಹಾರ್ ಜಂಗ್ ನಲ್ಲಿ ಪತ್ವಾಲ್ ಹೋಟೆಲ್ ಸೇರಿದಂತೆ ಅನೇಕ ಹೋಮ್ ಸ್ಟೇ ಗಳು ಲಭ್ಯವಿದೆ.
ದಿದನಾ ಹಾಗೂ ವಾಣ್ ಗ್ರಾಮಗಳಲ್ಲಿ ಹೋಮ್ ಸ್ಟೇಗಳು ಲಭ್ಯವಿದೆ.
#RoopkundTrekk #SkeletonLake #MysteriousLake #BrahmatalLake













😊
ReplyDeleteThank you 😍
DeleteWah wah
ReplyDeleteThaank you ❤
Delete